ಮುತ್ತು ಕೊಳ್ಳಿರೋ ಜನರು

ಮುತ್ತು ಕೊಳ್ಳಿರೋ ಜನರು
ಮುತ್ತು ಕೊಳ್ಳಿರೊ

ಮುತ್ತು ಬಂದಿದೆ ಕೊಳ್ಳಿ
ಸಚ್ಚಿದಾನಂದ ದಿವ್ಯ

ಜ್ಞಾನವೆಂಬೋ ದಾರದಲಿ
ಪೋಣಿಸಿದ ದಿವ್ಯ ಮುತ್ತು
ಜ್ಞಾನದಿಂದ ಕೊಂಬುದಿದನು
ದೀನರಾದ ಭಕ್ತ ಜನರು

ಕಟ್ಟಲಾಗದು ಮೂಗಿನಲಿ
ಇಟ್ಟು ಮೆರೆಯಲಾಗದಿದು
ಭ್ರಷ್ಟ ಜನಕೆ ಕಾಣಿಸದಂಥ
ಕೃಷ್ಣನೆಂಬೊ ಅಣಿಮುತ್ತು

ಹಿಡಿಯಲಿಕ್ಕೆ ನಿಲುಕದದು
ಕಡೆ ಕಾಣದೆಂದು ಬೆಲೆಯು
ಪೊಡವಿಗೆಲ್ಲ ಪುರಂದರವಿಠಲ
ಒಡೆಯನೆಂಬೊ ದಿವ್ಯ ಮುತ್ತು


ಈ ಕೀರ್ತನೆ ಕೇಳಲು ಇಲ್ಲಿ ಕ್ಲಿಕ್ ಮಾಡಿ
ರಾಗ: ಪಂತುವರಾಳಿ    ತಾಳ: ಆದಿ

No comments: